ಕಿಚ್ಚ ಸುದೀಪ ನಾಯಕರಾಗಿ ನಟಿಸಿರುವ ‘ರನ್ನ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೀನಿಮಿಷಾಂಬ ಪ್ರೊಡಕ್ಷನ್ ಲಾಂಛನದಲ್ಲಿ ಎಂ.ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಸುಧಾಕರ್.ಎಸ್.ರಾಜ್ ಛಾಯಾಗ್ರಹಣ, ಕೆ.ಎ.ಪ್ರಕಾಶ್ ಸಂಕಲನ, ಇಮ್ರಾನ್, ಗಣೇಶ್, ಧನ್ಕುಮಾರ್ ನೃತ್ಯ ನಿರ್ದೇಶನ, ಪೀಟರ್ ಹೆನ್ಸ್, ಗಣೇಶ್ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿಚ್ಚ ಸುದೀಪ, ಪ್ರಕಾಶ್ ರೈ, ರಚಿತಾರಾಂ, ಹರಿಪ್ರಿಯ, ಮಧುಬಾಲ, ದೇವರಾಜ್, ಸಾಧುಕೋಕಿಲ, ಅವಿನಾಶ್, ತಬಲನಾಣಿ, ಶರತ್ ಲೋಹಿತಾಶ್ವ, ಚಿಕ್ಕಣ್ಣ ಮುಂತಾದವರಿದ್ದಾರೆ.